ದಾನವ

ಕಲಿಯುಗದಲಿ ಸಾಗಿದೆ ನಿತ್ಯದ ಜೀವನ
ಸ್ಥಾನ ಮಾನಗಳಿಗಾಗಿಯೇ ಹೋರಾಟ
ಜೀವ ಹೋದರೂ, ಜೀವ ತೆಗೆದರೂ ಸಹ
ನಡೆಯುತ್ತಿದೆ ನಿತ್ಯವೂ ಬಡಿದಾಟ
|| ಕಲಿಗಾಲ ಇದು ಕೊಲೆಗಾಲ ||

ಮಾನವೀಯತೆಯ ಮಮಕಾರವಿಲ್ಲ
ಸಂಬಂಧಗಳ ಸಹವಾಸವಿಲ್ಲ
ಕೂಗಿಕೊಂಡರೂ ಕೇಳುವುದಿಲ್ಲ
ಮನದೊಳಗೇ ಮತ್ಸರ ಮನೆಮಾಡಿದೆಯಲ್ಲ
|| ಕಲಿಗಾಲ ಇದು ಕೊಲೆಗಾಲ ||

ಅಂಧಕಾರದ ಅರಮನೆಯಲ್ಲಿ
ಅವರುಗಳದ್ದೇ ಕಾರುಬಾರು
ನೆತ್ತರು ಹೀರುವ ನರಿ ನಾಯಿಗಳು
ಕಚ್ಚುತ ಕೊಚ್ಚುತ ಸಾಗಿಹ ದುಷ್ಟರು
|| ಕಲಿಗಾಲ ಇದು ಕೊಲೆಗಾಲ ||

ಅಂಧಾಭಿಮಾನಕೆ ಅಂಧರಾಗಿಹರು
ಯಾವುದೋ ಆಮಿಷಕೊ ಬಲಿಯಾಗಿಹರು
ಅಮಾಯಕರ ಬಲಿ ತೆಗೆಯುವ ಮೂಢರು
ಕರುಣೆಯು ಬಾರದ ಕಟುಕರು ಇವರು
|| ಕಲಿಗಾಲ ಇದು ಕೊಲೆಗಾಲ ||

ಈ ಘೋರ ಅನ್ಯಾಯವ ಎದುರಿಸ ಬೇಕಿದೆ
ಅಮಾಯಕ ಜೀವಿಗಳ ಜೀವ ಉಳಿಸ ಬೇಕಿದೆ
ಮಾನವತೆಯ ಮಮತೆಯ ತೋರಬೇಕಿದೆ
ಮಾನವ ಧರ್ಮವು ಮುಂದೆ ಸಾಗುತಿರಲಿ
ಕಲಿಗಾಲದಲ್ಲೂ ಕರುಣೆಯ ಬೆಳಕು ಕಾಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರ
Next post ಒಡನಾಟ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys